Saturday, October 19, 2013

ವಿಲಾಸನ ಜೊತೆ ಒಂದು ಸುಂದರ ಮಧ್ಯಾನ

ನಿನ್ನೆ ಊಟಕ್ಕೆ ಹೋದಾಗ ಬರಿ ಪುಸ್ತಕಗಳ ಮಾತು. ನಾನು ಮತ್ತು ಸ್ನೇಹಿತ ಚಂದನ್ ಪೂರ್ಣಚಂದ್ರ ತೇಜಸ್ವಿ, ಜೋಗಿ, ಕಂಬಾರರ ಪುಸ್ತಕಗಳ ಬಗ್ಗೆ ಹರಟೆಯಲ್ಲೇ ತಲ್ಲಿನರಗಿದ್ದೆವು. ಇದರ ಮಧ್ಯೆ ಸಿಕ್ಕ ಮತ್ತೊಬ್ಬ ಸ್ನೇಹಿತ ಹರ್ಷ, ಇವತ್ತು ಮೂರು ಗಂಟೆಗೆ ಇದಿಯಲ್ಲ ಪೇಂಟಿಂಗ್, ಬರ್ತಿದ್ಯ ಅಂದ್ರು. ನಮ್ಮ ಹುಡ್ಗ, ಉಜ್ಜಿರೆಯವ್ನು, ಪಕ್ಕ ಲೋಕಲ್ ಬಾ ಮಗ ಅಂದ್ರು. ಅಶ್ವತ್ ಹಾಡ್ಬೇಕಾದ್ರೆ ಯಾರೋ ಒಬ್ಬರು ಮಲ್ಲೇಶ್ವರಂ ಮೈದಾನದಲ್ಲಿ ಚಿತ್ರ ಬರೆಯುವುದನ್ನ ನೋಡಿದ್ದೆ. ಬಹುಷ್ಯ ಅದೇ ರೀತಿ ಇರಬೇಕೇನೋ ಅಂತ ಅಂದುಕೊಂಡು ನಮ್ಮ ಪುಸ್ತಕದ ಡಿಸ್ಕಶನ್ ಮುಗಿಸಿ ನನ್ನ ಜಾಗಕ್ಕೆ ಹೋಗಿ ಮತ್ತೆ ಕೆಲಸ ಶುರು ಮಾಡಿದೆ. ಬೇಗ ಬೇಗ ಕೆಲಸ ಮಾಡಿ, ಇನ್ನು ಹತ್ತು ನಿಮಿಷ ಇರುವಾಗಲೇ ಹೋಗಿ, ಇನ್ನೊಬ್ಬ ಸ್ನೇಹಿತ ರೋಹಿತ್ ಜೊತೆ ಮುಂದೆ ಮಧ್ಯದ ಸೀಟ್ ಹಿಡಿದು ಕೂತೆ. ಕಾರ್ಯಕ್ರಮ ಇದ್ದಿದ್ದು ಆಟಿಸಂ(Autism) ಇರುವ ಮಕ್ಕಳಿಗೆ ಸಂಗೀತದ ಶಾಲೆ ತೆಗೆಯಲು ನಿಧಿ ಸಂಗ್ರಹಿಸಲು. ಇಂಡಿಯಾ ಇನ್ಕ್ಲೂಷನ್ ಸಮ್ಮಿಟ್ನಲ್ಲಿ ವಿಲಾಸನು ಬಿಡಿಸಿದ ಚಿತ್ರಗಳನ್ನು ಹರಾಜು ಹಾಕಲಾಗುತ್ತದೆ. ಕಾರ್ಯಕ್ರಮಕ್ಕೆ ಮೊದಲು ಅಷ್ಟೇನೂ ಜನ  ಇರಲಿಲ್ಲ, ಒಬ್ಬೊಬ್ಬರೇ ಬರಲು ಶುರು ಮಾಡಿದರು. ನಂತರ ಕೂತಿದ್ದವರಿಗಿಂತ ನಿಂತಿದ್ದವ್ರೆ ಜಾಸ್ತಿ ಆದರು. ವಿಲಾಸ್ ಹೆಚ್ಚು ಸದ್ದು ಗದ್ದಲವಿಲ್ಲದೆ ಬಂದು ನೋಡು ನೋಡುತಿದ್ದಂತೆ ಅಬ್ದುಲ್ ಕಲಾಂರ ಚಿತ್ರ ಬರೆದೇ ಬಿಟ್ಟ. ನಾವೆಲ್ಲಾ ಮೂಕವಿಸ್ಮಿತರಾಗಿ ಕೂತಿದ್ದೆವು ಅಷ್ಟೇ. ಸರಿ ಸುಮಾರು ೫ ಅಡಿ ಮತ್ತು ನಾಲ್ಕು ಅಡಿ ಅಗಲದ ಕ್ಯಾನ್ವಾಸ್ ಅಲಗೆಯ ಮೇಲೆ ಕಲಾಂರ ಅದ್ಭುತ ಚಿತ್ರವನ್ನು ಗೀಚಿ, ನಮ್ಮನ್ನು ನಿಬ್ಬೆರಗಿನಿಂದ ಅಲ್ಲಿಯೇ ನೋಡುವಂತೆ ಮಾಡಿಬಿಟ್ಟ.


ನನಗೆ ಸ್ವಲ್ಪ ಬೇಜಾರಾದ ಸಂಗತಿಯಂದರೆ ನನಗೆ ಇವನ(ಪ್ರೀತಿಯಿಂದ ಅಷ್ಟೇ ಏಕವಚನ) ಬಗ್ಗೆ ಮೊದಲು ಗೊತ್ತೇ ಇರಲಿಲ್ಲ. ನಾನು ಒಂದಾನೊಂದು ಕಾಲದಲ್ಲಿ ಉಜ್ಜಿರೆ ಕಾಲೇಜಿಗೆ ಅರ್ಜಿ ಹಾಕಿ ಸೀಟು ಸಿಗದೇ ಮೈಸೂರಿನಲ್ಲಿ ಪಿ.ಯು.ಸಿ ಓದಲು ಹೋಗಿದ್ದೆ. ನಮ್ಮೂರಿಗೆ ಉಜ್ಜಿರೆ ಬಹಳ ದೂರವೇನಲ್ಲ, ಇಂತಹ ಅದ್ಭುತ ಪ್ರತಿಭೆಗಳನ್ನು ಹತ್ತಿರದಲ್ಲಿದ್ದರೂ ನಾವೇ ನೋಡಿರಲಿಕ್ಕಿಲ್ಲ ಮತ್ತು ತಿಳಿದುಕೊಂಡಿರುವುದಿಲ್ಲ ಎನ್ನುವುದೇ ಖೇದಕರ. ನಾವೇ  ಅಂದರೆ ನಮಗೆ ತಲುಪಿಸಬೇಕಾದ ಮಾಧ್ಯಮಗಳು ಬೇರೇನನ್ನೋ ತೋರಿಸಿ ಕಾಲಹರಣ ಮಾಡುತ್ತಿರುವುದು ವಿಷಾದನಿಯ. ಹೋಗಲಿ ಬಿಡಿ, ಅವನ ಬಗ್ಗೆ ಸ್ವಲ್ಪ ಇಲ್ಲಿ ಬರೆಯೋಣ ಎಂದು ಅನಿಸಿತು. ಇದರಿಂದಲಾದರು ಮತ್ತೆ ನಾಲ್ಕಾರು ಜನಕ್ಕೆ ನಮ್ಮ ಹುಡುಗನ ಬಗ್ಗೆ ತಿಳಿಯಲಿ ಅನ್ನುವುದೇ ಈ ಬ್ಲಾಗ್ ಪೋಸ್ಟಿನ ಉದ್ದೇಶ. ವಿಲಾಸ್ ನಾಯಕ್ ಧರ್ಮಸ್ಥಳದ ಹತ್ತಿರವಿರುವ ಉಜ್ಜಿರೆಯವನು. ೫ ವರ್ಷ ಐ.ಬಿ.ಎಂನಲ್ಲಿ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡಿ, ೨ ವರ್ಷಗಳಿಂದ ಚಿತ್ರಕಲೆಯನ್ನೇ ಕೆಲಸವನ್ನಾಗಿಸಿಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾನೆ ಮತ್ತು ಬಿಡಿಸುತ್ತಿದ್ದಾನೆ. ಮತ್ತೊಂದು ಖುಷಿಯ ವಿಚಾರವೆಂದರೆ ಇವನು ಈಗಾಗಲೇ ಬಹಳಷ್ಟು ಸಮಾಜಮುಖಿ ಕೆಲಸಗಳಿಗೆ ೧೦ ಲಕ್ಷಕ್ಕೂ ಅಧಿಕ ಮೊತ್ತದ ನಿಧಿ ಸಂಗ್ರಹ  ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಅವನ ಬಗ್ಗೆ ಹೆಚ್ಚು ತಿಲಿದುಕೊಳಬೇಕಾದರೆ ವಿಲಾಸ್ ನಾಯಕ್ ಎಂದು ಗೂಗಲ್ ಮಾಡಿ ಬೇಕಾದಷ್ಟು ವಿಷಯಗಳು ಸಿಗುತ್ತವೆ.

ವಿಲಾಸ್ ಕೈಯಲ್ಲಿ ಮೂಡಿಬಂದ ಸಚಿನ್!
ಅವನ ಬಗ್ಗೆ ಹೇಳುವುದನ್ನು ಹೇಳಿ ಆಗಿದೆ. ಈಗ ಮತ್ತಷ್ಟು ನಿನ್ನೆಯ ಬಗ್ಗೆ ಹೇಳುತ್ತೇನೆ. ಸರಿ ಸುಮಾರು ೫ ನಿಮಿಷಗಳು ಅಷ್ಟೇ. ಅಬ್ದುಲ್ ಕಲಾಂರ ಚಿತ್ರ ರೆಡಿ. ಮತ್ತೆ ಸ್ವಲ್ಪ ಸಮಯದ ನಂತರ ಇನ್ನೊಂದು ಅಲಗೆಯ ಮೇಲೆ ಬರೆಯಲು ಶುರು ಮಾಡಿದ. ಮತ್ತೆ ಐದು ನಿಮಿಷದಲ್ಲಿ ಒಂದು ಮುಗ್ದ ಅಂಗವಿಕಲ ಬಾಲಕನ ಚಿತ್ರ ನಮ್ಮ ಮುಂದೆ. ನಾವು ಮತ್ತಷ್ಟು ವಿಸ್ಮಿತರಾದೆವು. ಕೊನೆಯಲ್ಲಿ ಅರ್ಜುನನ ತರ ಪಾಶುಪತಾಸ್ತ್ರವನ್ನು ಇನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟು ಕೊಂಡಿದ್ದ. ಕೊನೆಗೆ ಬರೆದಿದ್ದು ಸಚಿನ ತೆಂಡೂಲ್ಕರ್ ಚಿತ್ರ. ಅದೂ ಉಲ್ಟಾ..! ನಾವು ಏನನ್ನು ಬರೆಯುತ್ತಿದ್ದಾನೆ ಎಂದು ಯೋಚಿಸುವುದರೊಳಗೆ ಸಚಿನ್ ನಮ್ಮ ಮುಂದೆ ಬಂದಾಗಿತ್ತು. ಅದನ್ನು ಹರಾಜು ಕೂಗಿದಾಗ ಅದರ ಬೆಲೆ ೧ ಲಕ್ಷ ಮತ್ತು ಹತ್ತು ಸಾವಿರ. ನೀವೇ ಯೋಚಿಸಿ ಅದರ ಸರಿಯಾದ ಬೆಲೆಯನ್ನು. ಉಲ್ಟಾ ಬಿಡಿಸಿ ತಿರುಗಿಸಿದ್ದೆ ತಡ ಚಪ್ಪಾಳೆಗಳ ಸುರಿಮಳೆ. ಅದೂ ನಮ್ಮ ಸೋಂಬೇರಿ ಜನ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದಾರೆ ಎಂದರೆ ವಿಲಾಸ್ ನಮ್ಮನ್ನು ಅದೆಷ್ಟು ಮೋಡಿ ಮಾಡಿದ್ದ ಎಂದು ನೀವೇ ಊಹಿಸಿ. ಅವನಿನ್ನೂ ನಮ್ಮಂತೆ ಯುವಕ, ಮತ್ತಷ್ಟು ಬೆಳೆಯಲಿ ಎಂಬುವುದೇ ನನ್ನ ಹಾರೈಕೆ. ನಾನಿನ್ನೂ ನಮ್ಮ ಅಣ್ಣಾವ್ರ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಚಂದನ್ ಕೂಡ!
ವಿಲಾಸ್ ನಾಯಕ್ ಬರೆದ ಮೂರು ಚಿತ್ರಗಳು.

ಈ ಚಿತ್ರವನ್ನು ಫೇಸ್ಬುಕ್ ನಿಂದ ಪಡೆದದ್ದು, ತೆಗೆದವರಿಗೆ ನನ್ನ ಧನ್ಯವಾದಗಳು.


Friday, October 11, 2013

An other day at school

PS: This is just a record of an event. If you are free, then read.

Ian Correa, head of the Hope foundation said, It's good that you guys are coming here and inspiring our kids! Specially men. Because of all the bad news these days, kids think all men are bad, it's good  that some folks come over and inspire them. I don't know how good or bad we are, but we learn many things from them than we teach something to the children. When I was in Hyderabad i used to teach english to school kids (you know my English and how bad it is! Now, think of kids ;) ) on saturdays  and in turn they used to teach me Telugu.

An other day at school for us to tell some of the wonderful stories to the kids, to conduct science experiments, to teach a theorem or a physics formula, to make them draw sunrise or a house or clouds, to make them answer the quiz questions and  to make them wonder. But for me it was a lesson. They are poor but they are happy. They don't have complex curriculum like International public schools but they also surprise me by their answers. As I already said I learn many things than I teach. I become more humble, more happier, more richer and more lucky as soon as I come back home.

I envy them; Look at the happiness!
Ah, I know; the above story is incomplete. As part of month of service in my organization a group 40 volunteers visited a school in R T Nagar. The school is run by an NGO Hope foundation. Most of the students who study are from near by slums. We had just one day. And of course, in one day government of India itself can't pass a simple bill, Is it possible for us to bring a change in the lives of kids. The simple answer is NO. But, we just wanted to inspire those kids and bring a smile for one day! And for volunteers, it was just fun and a change. So, we had planned few activities. Some of the interesting thoughts poured in. We decided to do a few, drawing competition for lower primary, quiz for higher primary, science experiments, computer lectures and some tips on exams and public speaking to 8th and 9th. 10th students had Quintessential Experiment. They had cricket and throw ball as outdoor games too.

Quintessential Experiment; A brainchild of Suhas Narasimhan
We enjoyed as much as kids did! Yey, we painted a wall and you can see the same in the below picture! Enjoyed the delicious lunch from Shanti Sagar. And as I said before we came home with some life lessons! I have to mention the spirit of our team and our volunteer ambassador Sankeertana for the lunch at least :) Thanks Sanky! 
These guys were proud that they can survive without a software job

This does not need a caption!
PS: Thanks to Radhakrishna(RK) for the pictures!

Monday, September 30, 2013

Bangalore Literature Festival - A feast

Shiv quoted at the end of the day; "Day starts with Gulzar saab and Prasoon Joshi and ends with Pandit Hariprasad Chaurasia".... What an epic day!! Last Saturday three friends(Manju, Shiv and me) enjoyed whole day like school kids! Yes, like school kids we discussed how many books we brought, how many got signed by authors and were amazed by the knowledge flew around us on a cloudy Saturday on lawns of Crown Plaza! Every discussion was unique. About poems, about writers, about writing performing arts, about current trends and about different languages what not. There were parallel sessions going on, it was so difficult to choose between one among two..:( Manju came to my help to make me understand gulzar's poems; I got a feeling that i should learn hindi to read and understand his poems. Right after this I rushed to hear from a kannada panel. The discussion was about the works of Kuvempu, Maasti, Kaaranta and Kambaara. I knew a little about them, but to get to hear from scholars was just blissful! I met Kambara and spoke to him for few mintues..yey!


I will just mention the variety of the events organized. If I start explain about each one of them, it may take many pages. I attended few discussions, I will try to mention some of the key topics discussed. There was a discussion about literature festival itself. Do you guys know where did this literature festival come from? any guesses? Yeah, you must be thinking, this might have come from the west could be the answer! William dalrymple explained it's origin! Basava Kalyana is the answer, we started literature festivals..Isn't it a wonderful feeling :) How many of you know Beary(ಬ್ಯಾರಿ) language? There 16 lakh people speak beary language all over the world and most of them in karnataka! Along with this, the panelists spoke about Konkani, Kodava and tulu languages and their culture :)
Discussion on "Oral literary languages of Karnataka – Tulu, Kodava, Konkani and Beary"
Right after this, the big debate started. Best sellers versus literary books! Is best sellers a trend? Shobha De, Aswin Sanghi, Shashi Deshpande and Ian Jack were the panelists. The discussion was so much fun with learning. How books become best sellers and at the same time how good books survive for generations was the take away from the discussion..and you know how fun it will be when Shoba De on stage(I meant in literary sense) ;)

Energy of the festival was increased like RCB score when Gayle is batting...Here the Gayle was replaced by our own Ramachandra Guha, his topic was; Is history a literature or social science. His lecture was amazing with clear facts! It was a history class but not a boring one like our old history classes during our school days. And the best is yet to come! That was  Pandit Hariprasad Chaurasia's music concert. He was accompanied by Subhankar Banerjee with tabala. We were so high with the music, believe me; no drink would have taken me into that level... Not at all possible.. Music has such a power and we were blessed to be there and to witness such a wonderful evening.

Man with content!
Event happened from September 27th to 29th in Crown plaza, electronic city. There were many best known writers visited BLF. As I could attend only one day, have capture only Saturday's experience. I must thank the organizers and volunteers. Everything was perfect. A very good place, food was amazing, book stalls and sit out area was best suited for book lovers. Thank you Vikram Sampath, Nanditha, Friends of BLF and volunteers team. And with wonderful friends, happiness increases! Manju and Shiv increased my happiness. We created wonderful memories for lifetime :) Thanks BLF! 
Volunteers; I can just say thank you! I know how difficult it is to organize such a big event :)


Crowd for Pt Hariprasad Chawrasia's Music concert!

PS: All the pictures are not mine, downloaded from facebook account of BLF, I don't know who clicked it. My sincere thanks to them.

Sunday, September 15, 2013

ನನ್ನ ಬದುಕು ಮತ್ತೊಬ್ಬನ ಕನಸು! ಮತ್ತೊಬ್ಬನ ಬದುಕು ನನ್ನ ಕನಸೇ?

 ಬದುಕಿನ ಸೂಕ್ಷ್ಮಗಳನ್ನು ಮತ್ತು ಸಣ್ಣ ಸಂತೋಷಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಜೀವನ ವ್ಯರ್ಥ. ಬಹಳಷ್ಟು ಪುಸ್ತಕಗಳನ್ನು ಓದಿ ಮತ್ತು ಹಲವಾರು ಜನರ ಜೊತೆ ಬೆರೆತು ಕಲಿತ ಸತ್ಯ! ಇಂತಹ ಸಣ್ಣ ಸಣ್ಣ ತುಣುಕುಗಳೇ ಚಿತ್ರವಾದಾಗ? ಹೌದು ಲೂಸಿಯದ ಬಗ್ಗೆ ಬರೆಯುತ್ತಿದ್ದೇನೆ. ಹಲವಾರು ಜನ ಹಲವು ವಿಚಾರಗಳಿಗಾಗಿ ಈ ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ನಾನು ಇಷ್ಟಪಟ್ಟಿದ್ದು ಮೇಲಿನ ಕಾರಣಕ್ಕೆ :)  ನಾನು ಚಿತ್ರಗಳನ್ನು ನೋಡುವುದೇ ಕಡಿಮೆ, ಅಂತದ್ರಲ್ಲಿ ವಿಮರ್ಶೆ ಎಲ್ಲ ಮಾಡುವುದಕ್ಕೆ ಹೋಗುವುದಿಲ್ಲ. ನಾನು ಅಷ್ಟು ಬುದ್ದಿವಂತನಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಮನುಷ್ಯ ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ ತುಳಿಯುವ ಪ್ರಾಣಿ, ಕನಸು ಕಾಣುತ್ತಾ ಬದುಕುವ ಜೀವ. ಇದೆ ಚಿತ್ರದ ಮೂಲ. ನಾಯಕನ ಕನಸೇ ಚಿತ್ರವನ್ನು ಓಡಿಸುತ್ತೆ. ನೋಡಿದವರಿಗೆ ಇದೊಂದು ಕಡಿಮೆ ಬಜೆಟ್ ಪಿಕ್ಚರ್ ಎಂದು ಅನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಚಿತ್ರದ ಎಡಿಟಿಂಗ್(editing) ಮಾಡಲಾಗಿದೆ. ಚಿತ್ರದಲ್ಲಿ ಎಲ್ಲಿಯೂ ಒಂದು ರೀತಿಯ ತಪ್ಪು ಸಂದೇಶ ಕೊಡುವಂಥಹ ಸಿನ್ಗಳಿಲ್ಲ. ಇದು ನಿರ್ದೇಶಕ ಪವನ್ರ ಕನಸಿನ ಕೂಸು. ಬದುಕಿನ ಆಳಗಳನ್ನು ತೋರಿಸುವುದರ ಜೊತೆಗೆ ಜನಕ್ಕೆ ಮನರಂಜನೆಯನ್ನು ಉಣಬಡಿಸುತ್ತಾರೆ. ಚಿತ್ರಕ್ಕೆ ಕಥೆಯೇ ಮೂಲಾಧಾರ. ಯಾವುದೇ ಸೂಪರ್ ಹೀರೋಗಳಿಲ್ಲದೆ ಚಿತ್ರ ಇನ್ನು ಓಡುತ್ತಿದೆ ಅಂದರೆ ನೀವೇ ಯೋಚಿಸಿ. ಕಥೆಯನ್ನು ಜನಕ್ಕೆ ತೋರಿಸುವುದು ಅಷ್ಟೇ ಮುಖ್ಯ ಅದನ್ನು ಪವನ್ ಚೆನ್ನಾಗಿ ಮಾಡಿದ್ದಾರೆ. ಇಲ್ಲಿ ಪವನ್ ಗೆಲ್ಲುತ್ತಾರೆ.

 ನಾಯಕ, ಸತೀಶ್ ನೀನಾಸಂ. ಇದು ಒಂಥರಾ ದ್ವಿಪಾತ್ರ ಅಭಿನಯ, ಇಲ್ಲೇ ನೋಡಿ ಚಾಲೆಂಜ್. ಒಂದು ಪಾತ್ರವನ್ನ ನೋಡಿದಾಗ ಇವನನ್ನು ಬಿಟ್ಟು ಬೇರೆಯವರ ಕೈಯಲ್ಲಿ ಆಗ್ತಿರಲಿಲ್ಲ ಎಂದು ಅನಿಸಿದರೆ ಅವನೇ ಸರಿಯಾದ ಕಲಾವಿದ. ಸತೀಶ, ಇಲ್ಲಿ ಗೆಲ್ಲುತ್ತಾನೆ. ಅವನ ಮುಗ್ದತೆ ಜನರ ಮನಸನ್ನು ಗೆಲ್ಲುತ್ತೆ. ಅವನ ಮಾತು, ಜನರಲ್ಲಿ ನಮ್ಮವನೇ ಈ ಹೈದ ಎಂದು ಅನಿಸುತ್ತೆ. ಇಕ್ಕಿ ಅಲ್ಲ ನಿಕ್ಕಿ, ನನಗೆ ಅವನ ಕನಸಿನ ಪಾತ್ರದಲ್ಲೇ ಇಷ್ಟವಾಗಿದ್ದು. ಅವನ ನಿಜ ಜೀವನದ ಪಾತ್ರ ಅವನಿಗೆ ಸಲಿಸಾಗಿರಬಹುದು. ಆದರೆ ಸೂಪರ್ ಸ್ಟಾರ್ ಆಗಿ ಅವನ ಅಭಿನಯ, ಗಾಂಭೀರ್ಯ ಮೆಚ್ಚುವಂತದ್ದು.

ನಾಯಕಿ, ಶ್ರುತಿ. ನಮ್ಮ ಪಕ್ಕದ ಮನೆಯ ಹುಡುಗಿಯಂತೆ ಅಭಿನಯಿಸಿದ್ದಾಳೆ. ಇವಳ ಪಾತ್ರದಲ್ಲಿ ಸಾಕಷ್ಟು ನೈಜತೆ ಎದ್ದು ಕಾಣುತ್ತೆ. ಅಭಿನಯದಲ್ಲಿ ಇವಳು ಅಷ್ಟೇ ಪಾತ್ರಕ್ಕೆ ಹೊಂದಿಕೆಯಾಗುವಂತೆ ಅಭಿನಯಿಸಿದ್ದಾಳೆ. ಮತ್ತೊಂದು ಮುಖ್ಯ ಪೋಷಕ ಪಾತ್ರ, ಅಚ್ಯುತ ಕುಮಾರ್. ಕಾಯಕವೇ ಕೈಲಾಸ ಈ ಮನುಷ್ಯನಲ್ಲಿ ನೋಡಬಹುದು. ಬಹಳ ಅನುಭವದ ನಟರು, ನಾನು ಯಾವ ದೊಣ್ಣೆ ನಾಯಕ ಅವರ ಬಗ್ಗೆ ಬರೆಯೋಕೆ :) ಪುರ್ರ್ ಎಂದು ಬಾಯಿಗೆ ಏನೋ ಎಳೆದುಕೊಳ್ಳುವ ಪೋಲಿಸ್ ಆಫೀಸರ್ ಕೂಡ ನನಗೆ ಇಷ್ಟವಾದ ಪಾತ್ರ. 

ಸಂಗೀತದ ಬಗ್ಗೆ ನನಗೆ ಅಷ್ಟು ಜ್ಞಾನ ಇಲ್ಲ. ಆದರೆ ಹಾಡುಗಳ ಸಾಹಿತ್ಯ ಮೊದಲೇ ಇಷ್ಟವಾಗಿದ್ದವು. ಪೂರ್ಣಚಂದ್ರ ಯಾವುದಕ್ಕೂ ಮತ್ತು ಯಾರಿಗೂ;) ಕೊರತೆ ಬರದಂತೆ ಬಹಳಷ್ಟು ರೀತಿಯ ಹಾಡುಗಳನ್ನು ಹಾಕಿದ್ದಾರೆ. ಕ್ಯಾಮರ ಮ್ಯಾನ್ ಕೆಲಸವೂ ಅಷ್ಟೇ ಅದ್ಭುತವಾಗಿದೆ. ಒಂದು ಸಣ್ಣ ಕ್ಯಾಮೆರಾದಲ್ಲಿ ಸರ್ಕಸ್ ಮಾಡಿದ್ದು ಎಂದು ಓದಿದ್ದೆ.

PS: ಒಂದೆರಡು ಬಾರಿ ಕಣ್ಣುಗಳು ಒದ್ದೆಯಾದರೂ ಆಗಬಹುದು!

ಪವನನ ಪ್ರಯೋಗ



ಇನ್ನು ಚಿತ್ರ ಆನ್-ಲೈನ್ ನಲ್ಲಿ ಬಿಡುಗಡೆಯಾಗಿಲ್ಲ, ಆದರೆ ಇಲ್ಲಿ ವೀಕ್ಷಿಸಬಹುದು.

Thursday, August 1, 2013

ನಮ್ಮ ದೇಶ ಹಿಂಗೆ ಬಿಡಿ!

ಮೊನ್ನೆ ಅಸ್ಸಾಮಿನಲ್ಲಿ ನಡೆದ ಗಲಭೆಗಳ ಬಗ್ಗೆ ಮಾತನಾಡುತ್ತ ನನ್ನೊಬ್ಬ ಸ್ನೇಹಿತ ಪವನ್ ಹೇಳ್ತಿದ್ದ, ಮಗ..! ನಾವು ದೇಶದ  ಬಗ್ಗೆ ಯೋಚನೆ ಮಾಡುತ್ತಾ ತಲೆ ಕೆಡಿಸಿ ಕೊಂಡರೆ ನಾನು ದೇಶ ಬಿಟ್ಟು ಯಾವದಾದ್ರು ಬೇರೆ ದೇಶಕ್ಕೆ ಹೋಗಿ ಇದ್ಬಿಡ್ಬೇಕು ಅನಿಸುತ್ತೆ ಅಂದ. ಒಂದು ದೇಶ ಬೆಳೆಯುವುದು ಹೇಗೆ? ಅದರ ಸಂಪತ್ತು ಯಾವುದು? ಇವೆಲ್ಲಾ ಯಾವಾಗಲೂ ಕ್ಲಿಷ್ಟ ಪ್ರಶ್ನೆಗಳೇ! ಅದೂ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಅದರ ಬಗ್ಗೆ ಯೋಚಿಸುವುದೇ ಬೇಡ ಎಂದು ಅನಿಸುತ್ತದೆ. ಹಾಗೇ ಇನ್ನೊಬ್ಬ ಸ್ನೇಹಿತ, ನಟ ಧನಂಜಯ ಹೇಳ್ತಿದ್ದ ಬೇರೆಯವರಿಗೆ ತೊಂದರೆ ಮಾಡದೆ, ಆದರೆ ಸಹಾಯ ಮಾಡಿ ಆಗದಿದ್ದರೆ ತೊಂದರೆ ಮಾಡದೆ ಬದುಕಿದರೆ ಸಾಕು ಎಂದ. ನಾನು ಯಾಕೆ ಈ ಪುರಾಣ ಉದ್ತಿದೀನಿ ಅನ್ಕೊತಿದಿರ?

ಈ ತರದ ಎಷ್ಟೋ ಘಟನೆಗಳು ನಮ್ಮ ದೇಶದಲ್ಲಿ ನಡೆದಿವೆ ಮತ್ತು ನಡೆಯುತ್ತಲಿವೆ. ಮೊನ್ನೆ ನಾರಾಯಣ ಹೃದಯಾಲಯದ ಡಾಕ್ಟ್ರು ದೇವಿ ಶೆಟ್ಟಿ ಮಾತನಾಡುತ್ತಾ ಯಾವುದಾದರೂ ಒಂದು ದೇಶವನ್ನೂ ದೇವರು ನಡೆಸುತ್ತಿದ್ದರೆ ಅದು ಭಾರತ ಮಾತ್ರ ಅಂದ್ರು! ಕೂತು ಯೋಚಿಸಿದರೆ ಒಂದು ಸಣ್ಣ ನಗು ಜೊತೆಯಲ್ಲೇ ಸತ್ಯ ಅನ್ನೋ "ನಂಬಿಕೆ". ಆದೊಂದೇ ಆಶಾ ಭಾವನೆ! ಆದರೆ ಒಂದು ಸಂತೋಷದ ಸಂಗತಿ ಅಂದರೆ ಈ ಎಲ್ಲಾ ಸಮಸ್ಯೆಗಳ ಜೊತೆಯಲ್ಲೇ ಬಹಳಷ್ಟು ಜನ  ದೇಶದಲ್ಲಿಯ ಸಮಸ್ಯೆಗಳ ಬಗ್ಗೆ ಅವುಗಳ ನಿವಾರಣೆಗೆ ಅವರದೇ ಆದ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಶನಿವಾರ ಶಾಲೆಗಳಿಗೆ ಹೋಗಿ ಪಾಠ ಮಾಡುವ ಸ್ನೇಹಿತರು, ವರ್ಷಕೊಮ್ಮೆ ಗ್ರಾಮೀಣ ಶಾಲೆಗಳಿಗೆ ಹೋಗಿ ಪುಸ್ತಕ ಮತ್ತು ಕಲಿಯಲು ಬೇಕಾದ ವಸ್ತುಗಳನ್ನು ಕೊಡಿಸಿ ಬರುವ ಸ್ನೇಹಿತರು, ಒಬ್ಬ ವಾಯುಸೇನೆಯ ಸೈನಿಕ ಸ್ನೇಹಿತನ ನೆನಪಿನಲ್ಲಿ ಒಂದು ಸಂಸ್ಥೆ(Sreejith Maloor trust) ತೆರೆದು ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ದಿಗೆ ದುಡಿಯುತ್ತಿರುವ ಸ್ನೇಹಿತರೂ ಇದ್ದಾರೆ. 

ಮತ್ತೊಂದು ಸ್ನೇಹಿತರ ತಂಡ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ನಾನು ಹೇಳುವುದೇನು ಬೇಡ ಬಿಡಿ, ಅದು ಗೊತ್ತಿರುವ ವಿಷಯ. ಶಿಕ್ಷಣ ಮತ್ತು ನಾಗರೀಕತೆ ಉತ್ತಮ ಸಮಾಜವನ್ನು ನಿರ್ಮಿಸುವುದರ ಬದಲು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿವೆ. ಉತ್ತಮ ದೇಶವನ್ನು ಕಟ್ಟಬೇಕಾದರೆ ಒಂದೊಳ್ಳೆ ಸಮಾಜವನ್ನು ಕಟ್ಟಬೇಕು. ಉತ್ತಮ ಸಮಾಜಕ್ಕೆ ಉತ್ತಮ ನಾಗರೀಕರೇ ಜೀವಾಧಾರ. ಹೆಣ್ಣಿನ ಮೇಲಿನ  ದೌರ್ಜನ್ಯಗಳನ್ನು ತಡೆಯುವುದು ಹೇಗೆ? ಯಾವುದರಿಂದ ಇದನ್ನು ತಡೆಯುವುದು? ದೇಶದ ಕಠಿಣ ನಿಯಮಗಳು ಇಂತಹ ಸಮಸ್ಯೆಗಳನ್ನೂ ತಡೆಯಲು ಸಾಧ್ಯವೇ? ಸ್ವಲ್ಪ ಮಟ್ಟಿಗೆ ಭಯ ಹುಟ್ಟಿಸಬಹುದು ಅಷ್ಟೇ, ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು,  ಇದೊಂದೇ ಇದಕ್ಕೆ ಸರಿಯಾದ  ಪರಿಹಾರ. ಗಂಡಸರಲ್ಲಿ ಹೆಂಗಸರ ಬಗ್ಗೆ ಗೌರವ ಮೂಡಬೇಕು. ಇದು ಯಾರಿಂದ ಸಾಧ್ಯ? ಹೆಣ್ಣು ಮತ್ತು ಗಂಡು ಇಬ್ಬರೂ ಮಾಡಬೇಕಾದ ಕೆಲಸ ಇದು. ನಾನು ಹೇಳಿದಂತೆ ಈ ಸ್ನೇಹಿತರ ತಂಡ ಜನರಲ್ಲಿ ಜಾಗೃತಿ ಮೂಡಿಸಲು ಕಿರುಚಿತ್ರ ಮತ್ತು ಪೆನ್ನಿನ ಮೊರೆ ಹೋಗಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ- knowyourstar. ಒಂದೊಳ್ಳೆ ಸ್ವಾರ್ಥವನ್ನ ಬೆಳಿಸಿಕೊಳ್ಳೋಣ, ಅದೇನಪ್ಪ ಒಳ್ಳೆ ಸ್ವಾರ್ಥ ಅಂತೀರ, ನಮ್ಮ ಸುತ್ತಲೂ ಒಳ್ಳೆಯ ಸಮಾಜವನ್ನು ಬಯಸುವುದು ಸ್ವಾರ್ಥವಲ್ಲವ್ವೆ?

ನಾನು ಮೊದಲು ಎರಡು ಪ್ರಶ್ನೆಗಳನ್ನು ಎತ್ತಿದೆ... ಒಂದು ದೇಶ ಬೆಳೆಯುವುದು ಹೇಗೆ? ಅದರ ಉತ್ತಮ ಜನರಿಂದ! ಇನ್ನೊಂದು ಪ್ರಶ್ನೆ.. ಅದರ(ದೇಶದ) ಸಂಪತ್ತು ಯಾವುದು? ಅದರ ಉತ್ತಮ ಜನ..! ಹೌದಲ್ವೆ ಸ್ನೇಹಿತರೆ?

ಕೇಳಿಸಿಕೊಳ್ಳಲು ಇಲ್ಲಿ ಒತ್ತಿ

ಕೆಲವು ಸ್ನೇಹಿತರು ತಯಾರಿಸಿದ ಕಿರು ಚಿತ್ರ ಇಲ್ಲಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಅವರ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ - RAPE: Rise Against Punishable Eccentricity

Friday, April 12, 2013

ನಮ್ಮವರು: ಜೀವನೋತ್ಸಾಹದ ರಾಮರಾವ್

ನಮ್ಮಲ್ಲಿ ಅದೆಷ್ಟೊಂದು ಸೋಮಾರಿತನ ಬಂದಿದೆ ಮತ್ತು ಕೆಲವೊಮ್ಮೆ ನಾವೆಷ್ಟು ನಾಲಾಯಕ್ ಆಗಿದಿವಿ ಅನಿಸುತ್ತೆ. ಕೊನೆಯ ಭಾನುವಾರ ನನ್ನ ಸ್ನೇಹಿತನ ಮದುವೆ ಇತ್ತು. ಹೋಗಬೇಕೆಂದು ನಿರ್ಧರಿಸಿ ಕೆಲವರು ಸ್ನೇಹಿತರಿಗೆ ಫೋನ್ ಹಾಯಿಸಿ ಕೇಳಿದೆ. ಮದುವೆ ಇದ್ದಿದ್ದು ಬೆಂಗಳೊರಿನಲ್ಲೇ. ಒಬ್ಬ ಹೇಳಿದ, ಮಗ ತುಂಬಾ ಟ್ರಾಫಿಕ್, ಬೈಕ್ ಅಲ್ಲಿ ಬರೋಕೆ ಬೇಜಾರು, ಮತ್ತೊಬ್ಬ ಮಗ ಏನು ಗಿಫ್ಟ್ ತಗೊಂಡಿಲ್ಲ, ಹೋಗ್ಡಿದ್ರು ನಡಿಯತ್ತೆ ಬಿಡು ನಾವೇನು ಅಷ್ಟು ಕ್ಲೋಸ್ ಇರಲಿಲ್ಲ ಬಿಡು ಅಂದ! ಇಬ್ಬರೂ ಸೋಮಾರಿಗಳೇ, ೫ ದಿನ  ಕತ್ತೆ ತರ ಕೆಲಸ ಮಾಡಿ ಮತ್ತೆರಡು ದಿನ ಬರಿ ಮಲಗುವ, ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜೀವನವನ್ನು ಯಾವಾಗಲು ಬೈಕೊಂಡೆ ಕಳೆಯುವ ಸ್ನೇಹಿತರು! ನಾವು ಇಂತವರನ್ನು ಬಹಳಷ್ಟು ಜನರನ್ನ ನೋಡಿರ್ತಿವಿ.

ಆದರೆ ಕೆಲವರು ನಮ್ಮೊಳಗೇ ಇರುವವರು ಅದೆಷ್ಟು ಉತ್ಸಾಹದಿಂದ ಜೀವನ ಸಾಗಿಸ್ತಾರೆ. ಅದೇನೇ ಕಷ್ಟದ ಸನ್ನಿವೇಶ ಬರಲಿ, ಅದೆಷ್ಟೇ ದಣಿವಿರಲಿ, ಅವರ ಜೀವನೋತ್ಸಾಹಕ್ಕೆ ಒಂದು ಚೂರು ಕಡಿಮೆ ಆಗೋಲ್ಲ. ಅಂಥಹ ಜೀವನೋತ್ಸಾಹವನ್ನು ನಾನು ಬಹಳಷ್ಟು ಸ್ನೇಹಿತರಲ್ಲಿ, ಹೊರಗಿನವರಲ್ಲಿ, ಬಸ್ಸಿನಲ್ಲಿ, ಪಾರ್ಕಿನಲ್ಲಿ, ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತೆ ಕೆಲವು ಸ್ಥಳಗಳಲ್ಲಿ ಕಂಡಿದ್ದೇನೆ. ಇಲ್ಲಿ ನಾನು ಮೊನ್ನೆ ಭೇಟಿಯಾದ ರಾಮರಾವ್ ಬಗ್ಗೆ ಬರೆಯೋಣ ಎಂದು ಅನಿಸಿತು. ಮೊನ್ನೆ ಅಂದರೆ ಎರಡು ವಾರಗಳ ಹಿಂದೆ ಎಂದು ಓದಿಕೊಳ್ಳಿ :)

ವೀಕ್ಎಂಡ್ ಗಳಲ್ಲಿ ಲೇಟ್ ಆಗಿ ಎದ್ದರೂ ಸಹ ಒಂದೆರಡು ಸುತ್ತು ಹಾಕಿ ಬರೋಣ ಎಂದು ನಮ್ಮ ಮನೆಯ ಹತ್ತಿರ ಇರುವ ಪಾರ್ಕಿಗೆ ಹೋಗುತ್ತೇನೆ. ನನಗೆ ಒಂದು ಸಿಕ್ಕವರಿಗೆಲ್ಲ ಒಂದು ಸಣ್ಣ ನಗು ಕೊಡುವ ಅಭ್ಯಾಸವಿದೆ(ಕೆಲವೊಮ್ಮೆ ಮುಂದಿನವರು ಪ್ರತಿಕ್ರಿಯೆ ಕೊಡದಿದ್ದರೂ ನಾನು ಕೊಟ್ಟು ಮುಂದೆ ಸಾಗುವೆ). ಒಂದೆರಡು ಸುತ್ತು ಹಾಕಿದ ಮೇಲೆ ಒಂದು ಬೆಂಚಿನ ಮೇಲೆ ಒಬ್ಬ ಸರಿ ಸುಮಾರು ನಮ್ಮ ಅಪ್ಪನ ವಯಸ್ಸಿನವರು ಕೂತು ವಿಶ್ರಮಿಸುತ್ತಿದ್ದರು. ಅವರ ಬಲಗೈಯಲ್ಲಿ ಈ ತಾತಂದಿರು ಹಿಡಿದುಕೊಳ್ಳುವ ಊರುಗೋಲು. ಅವರಿಗೆ ಒಂದು ಸಣ್ಣ ನಗು ಬೀರಿದೆ, ಮತ್ತೆ ನನ್ನ ಸುತ್ತು ಮುಗಿಸಲು ಮುಂದೆ ಓಡಿದೆ. ಓಟ ಮುಗಿದ ಮೇಲೆ ಸುಸ್ತಾಗಿ ಸುಮ್ಮನೆ ನಡ್ಕೊಂಡು ಬರುತ್ತಿದ್ದೆ, ರಾಮರಾವ್ ಇನ್ನ ಅಲ್ಲಿಯೇ ಕುಳಿತ್ತಿದ್ದರು. ನನ್ನ ನೋಡಿದ ತಕ್ಷಣ ಅವರು "ಹಲೋ" ಅಂದ್ರು, ನಾನು ಹಲೋ ಸರ್ ಅಂದು ಅವರ ಪಕ್ಕ ಕುಳಿತೆ. ಅವರು ಆ ಪಾರ್ಕಿಗೆ  ಮೊದಲು ಬರುತ್ತಿದ್ದರಂತೆ.  ಕೊನೆಯ ೮ ತಿಂಗಳಿಂದ ಬಂದಿರಲಿಲ್ಲ ಅಂದ್ರು. ನಾನು ಯಾಕೆ ಬರುತ್ತಿರಲಿಲ್ಲ ಅಂತೆಲ್ಲ ಪ್ರಶ್ನೆ ಹಾಕಿದೆ.


ಅವರು ಅವರ ಕಥೆ ಹೇಳಲು ಶುರು ಮಾಡಿದರು. ೮ ತಿಂಗಳ ಹಿಂದೆ ರೋಡ್ ಕ್ರಾಸ್ ಮಾಡುವಾಗ ಒಂದು ಟೆಂಪೋ ಗುದ್ದಿ ಅವರ ಎರಡು ಕಾಲುಗಳನ್ನ ಕಳೆದುಕೊಳ್ಳುವಂಥಹ ಪರಿಸ್ಥಿತಿ ಬಂತು. ಅವರು ಈಗ ಎರಡೂ ಕೃತಕ ಕಾಲುಗಳಲ್ಲಿ ನಡೆಯಬೇಕು. ಅದರಲ್ಲಿಯೇ ಅವರು ಯಾರ ಸಹಾಯವೂ ಇಲ್ಲದೆ, ಕೆಲವೊಮ್ಮೆ ಸ್ವಲ್ಪ ಸಹಾಯ ಪಡೆದು ಕೊಂಡು ಅವರ ಜೀವನ ಸಾಗಿಸುತ್ತಿದ್ದಾರೆ.

ಹೀಗೆ ನಾವಿಬ್ಬರು ಕೆಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾಗ, ಮತ್ತೊಬ್ಬರು ನಮ್ಮ ಪಾರ್ಕಿನಲ್ಲೇ ವಿಹರಿಸಲು ಬರುವವರು ಬಂದು ಕೇಳಿದರು. ಇವಾಗ ಕಷ್ಟ ಆಗುತ್ತೆ ಅಲ್ವಾ, ನಡೆಯೋಕೆ ಎಲ್ಲ ಆಗೋಲ್ಲ, ಸುಮ್ಮನೆ ವಾಕ್ ಎಲ್ಲ ಯಾಕೆ ಮಾಡ್ತಿರ ಅಂತ. ಒಂದು ನಿಮಿಷವೂ ತಡ ಮಾಡದೆ, ಏನನ್ನು ಯೋಚಿಸದೆ ಅವರು ಪ್ರತಿಕ್ರಿಯಿಸಿದರು. ಅವರ ಪ್ರತಿಕ್ರಿಯೆ ನಿಜಕ್ಕೂ ನನ್ನ ಉತ್ಸಹವನ್ನ ಮತ್ತು ಗೌರವವನ್ನ ಹಿಮ್ಮಡಿಗೊಳಿಸಿತು. ಅವರ ಉತ್ತರ ಹೀಗಿತ್ತು, "ಅಯ್ಯೋ ತೊಂದರೆ ಇಲ್ಲ ಸ್ವಾಮೀ, ನೀವೂ ಅರ್ಧ ಗಂಟೆಯಲ್ಲಿ ೫ ರೌಂಡ್ ಹಾಕಿದರೆ ನಾನು ಒಂದು ರೌಂಡ್ ಹಾಕ್ತೇನೆ ಅಷ್ಟೇ. ನಾನು ತೊಂದರೆಯಿಲ್ಲದೆ ನಡಿತೇನೆ ಅಂದ್ರು". ಅದೆಷ್ಟು ಜೀವನೋತ್ಸಾಹ ಅಲ್ವೇ, ಎರಡು ಕಾಲಿಲ್ಲ ಮತ್ತು ಕೃತಕ ಕಾಲುಗಳ ಮೇಲೆ ಜೀವನ. ಮತ್ತಷ್ಟು ಮಾತನಾಡಿ ಮತ್ತೊಂದು ನಗು ಬೀರಿ ಅಲ್ಲಿಂದ ಅವರ ಬಗ್ಗೆಯೇ ಯೋಚಿಸುತ್ತಾ ಮನೆಯ ಕಡೆಗೆ ಹೊರಟೆ!

ನಿನ್ನೆ, ಯುಗಾದಿ ಹಬ್ಬದ ದಿನ ನನ್ನೊಬ್ಬ ಸ್ನೇಹಿತ ಸುಹಾಸ್ ನನ್ನ ನೋಡಲು ಹೋಗಿದ್ದೆ. ಅವನು ಹೋದ ವಾರ ಊಟಿ ಬಳಿ ಸೈಕ್ಲಿಂಗ್ ಗೆ ಹೋಗಿ, ಬಿದ್ದು, ಮುಖ ಮತ್ತು ಮೈ ಕೈಗೆ ಪೆಟ್ಟು ತಿಂದಿದ್ದ. ಒಂದೆರಡು ದಿನ ಆಸ್ಪತ್ರೆಯಲ್ಲಿ ಇದ್ದು, ಮೊನ್ನೆ ತಾನೇ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದ. ಅವನನ್ನ ಸ್ವಲ್ಪ ಸಮಯ ಮಾತನಾಡಿಸಿ, ಅವರಮ್ಮ ಕೊಟ್ಟ ಮಾವಿನಕಾಯಿ ಚಿತ್ರಾನ್ನ ಮತ್ತು  ಹಲ್ವಾ ತಿಂದು ಹೊರಟೆ. ಬಾಗಿಲ ಬಳಿ ಬಂದು ಇನ್ನೇನು ಹೊರಡುವ ಸಮಯದಲ್ಲಿ, ಅವರ ತಂದೆಯ ಜೊತೆ ಮಾತನಾಡುತ್ತಿದ್ದೆ. ಅವರು ಹೇಳಿದ್ರು ಸುಹಾಸ್ ಗೆ ಯಾವಾಗಲು ನಿನ್ನ ಮುಂದಿನ ಹಲ್ಲನ್ನ ಮುರಿಸಿ ಕೃತಕವಾದ ಬೇರೆಯ ಹಲ್ಲನ್ನ ಹಾಕಿಸ್ತಿನಿ ಅಂತಿದ್ದೆ. ಅದಕ್ಕೆ ಅವನು ನನಗೆ ನೀವೂ ಹೇಳ್ತಿದ್ರಲ್ಲ ಅಪ್ಪ ನೋಡಿ ಈವಾಗ ಮುಂದಿನ ಹಲ್ಲನ್ನ ಹಾಕಿಸಲಿ ಅಂತ ಮುರ್ಕೊಂಡಿದಿನಿ ಅಂದನಂತೆ. ಆ ನೋವಲ್ಲೂ ಅದೆಷ್ಟು ಉತ್ಸಾಹ ಮತ್ತು ಏನು ಆಗಿಯೇ ಇಲ್ಲ ಎಂಬ ಭಾವ ಅಲ್ಲವೇ? ನಾನು ಕಂಡಂತೆ ಇವನು ಒಬ್ಬ ಉತ್ಸಾಹಿ! ಅವನು ಬೇಗ ಗುಣಮುಖನಾಗಲಿ ಎಂದು ಬಯಸ್ತೇನೆ.
 ಇವನೇ, ಹಲ್ಲು ಮುರಿದುಕೊಂಡ ಸುಹಾಸ್
ನಾವುಗಳು ಅಷ್ಟೇ, ಏನೋ ಮಾಡುವ ಭರದಲ್ಲಿ, ಜೀವೊನೋತ್ಸಹವನ್ನೇ ಮರೆತಿರುತ್ತೇವೆ. ಅದೇನೋ ಯಾವಾಗಲು ನಮ್ಮ ಜೀವನ ಸಪ್ಪೆ, ಬೋರು, ಏನು ಬದಲಾವಣೆ ಇಲ್ಲ ಅಂದು ಗೊಣಗುವವರನ್ನು ಯಾroo ಸರಿ ಮಾಡಲಾಗದು! ಆ ರಾಮರಾವ್ ಮತ್ತು ನನ್ನ ಸ್ನೇಹಿತ ಸುಹಾಸ್ ನ  ಜೀವನೋತ್ಸಾಹ ನಮ್ಮದ್ದಗಾಲಿ. ಹೌದಲ್ಲವೇ? 

Sunday, March 31, 2013

ನಮ್ಮವರು: ವೀಳ್ಯದೆಲೆ ಅಜ್ಜಿ

ಮೊನ್ನೆ ಮೊನ್ನೆ ನಮ್ಮ ಆಫೀಸಿನಲ್ಲಿ ಕಾಫಿ ಹೀರುತ್ತಾ, ಬಿಟ್ಟಿ ಬ್ರಿಟಾನಿಯ ಬಿಸ್ಕತ್ತು ತಿನ್ನುತ್ತಾ ಹರಟುತ್ತಿರುವಾಗ ಒಂದು ವಿಷಯ ಬಂತು.  ಅದು ಬಹಳ ಚಿಲ್ಲರೆ ವಿಷಯವೇ, ಆದರೂ ಅದನ್ನ ಸೂಕ್ಷ್ಮ ರೀತಿಯಲ್ಲಿ ನೋಡಿದರೆ ಇಲ್ಲೊಂದು ದೊಡ್ಡ ಕಂದಕ ಬೆಳೆಯುತ್ತಿದೆ ಎಂದು ಅನಿಸಿತು! ವಿಷಯವೇನೆಂದರೆ ನಮ್ಮ ಆಫೀಸಿನ ಬಸ್ಸುಗಳಲ್ಲಿ ಜನ ಮಾತನಾಡುವುದಿಲ್ಲ ಅನ್ನುವುದು! ನಿಮಗೆ ಅನಿಸಬಹುದು ಮತ್ತೆ ಏನು ಮಾಡುವರು ಇವರು ಅಂತ! ಕೆಲವರು ಪಕ್ಕದವರ ಬಿಟ್ಟು ದೂರದಲ್ಲಿರುವವರ ಜೊತೆ ಫೋನಿನಲ್ಲೇ ಮುಳುಗುವ ಮಂದಿ ಅಥವಾ ಸ್ವಲ್ಪ ಸಮಯ ಸಿಕ್ಕಿತಲ್ಲ ಎಂದು ಗೊರಕೆ ಹಾಕುವವರು ಸಿಗುವರು(ಕೆಲವೊಮ್ಮೆ ನಾನು ಗೊರಕೆ ಹಾಕಿದ್ದೇನೆ, ಪಕ್ಕದವರು ಹೇಳಿದ್ದು). ಹೀಗೆ ಕಾಫಿ ಕಾರ್ನರ್ ಹರಟೆ ಮುಂದುವರೆದು ನಮ್ಮ ಜೀವನ ಅದೆಷ್ಟು ಯಾಂತ್ರಿಕವಾಗುತ್ತಿದೆ ಎನ್ನುವ ಕಹಿ ಸತ್ಯ ನಮ್ಮ ಆ ದಿನದ ಟಾಪಿಕ್!

ಆದರೂ ನಮ್ಮೊಳಗೆ ಕೆಲವಾರು ಜನ ನಮ್ಮ ಯಾಂತ್ರಿಕೃತ ಬದುಕನ್ನ ಆ ಕ್ಷಣಕ್ಕೆ ನಿಲ್ಲಿಸಿ, ಒಂದು ಸಣ್ಣ ಸುಂದರ ಟಚ್  ಕೊಡುವ ಹಾಗು ಮನಸಿಗೆ ಈ ದಿನಗಳಲ್ಲೂ ಆ ಬಾಂಧವ್ಯ ಬೆಸೆಯುವ ಅನಾಮಿಕ ಸಾಮಾನ್ಯ ಜನರೂ ಸಿಗುತ್ತಾರೆ. ಆ ಸಾಮಾನ್ಯ, ಮನಸಿಗೆ ಒಳ್ಳೆಯ ಹಿತಾನುಭವ ನೀಡುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಬರೆಯೋಣ ಅಂದುಕೊಂಡು ಈ ಸರಣಿ ಶುರು ಮಾಡಿದ್ದೇನೆ.

ಅದಕ್ಕಾಗಿ ಮೊದಲಿಗೆ ಬರೆಯಬೇಕು ಅನಿಸಿದ ಮೊದಲ ವ್ಯಕ್ತಿ ವೀಳ್ಯದೆಲೆ ಅಜ್ಜಿ. ನಿಮಗೆ ಅನಿಸುತ್ತಿರಬಹುದು ಇದು ಯಾರು ಅಂದು. ನಾನು ಪ್ರತಿ ಭಾನುವಾರ ಯಶವಂತಪುರ ಸಂತೆಗೆ ಹೋದಾಗ ವೀಳ್ಯದೆಲೆಗಾಗಿ ಅಶ್ರಯಿಸಿರುವ ಒಂದು ಅಜ್ಜಿ. ಈ ದಿನಗಳಲ್ಲಿ ಅದೆಂಥಹ ಬಿಸಿಲು. ಅಲ್ಲೊಂದು ಕಪ್ಪು ಛತ್ರಿ ಹಿಡಿದು ಎಲೆ-ಅಡಿಕೆ ಜಗೆಯುತ್ತಾ ಕೂತಿರುತ್ತಾಳೆ ಆ ಅಜ್ಜಿ. ದಪ್ಪ ಶರೀರ, ಬಿಸಿಲಿಗೆ ಬೆಂದು ಕಪ್ಪಾದ ಮುಖ. ಆದರೆ, ತಲೆಯ ತಿನ್ನುವ ಗ್ರಾಹಕರ ನೋಡಿಯು ಶಾಂತ ಚಿತ್ತದಿಂದ ವೀಳ್ಯದೆಲೆ ಮಾರುವ ಅಜ್ಜಿ. ಇವಳಿಗೆ ಸರಿ ಸುಮಾರು ೬೦ ದಾಟಿರಬಹುದು. ನನ್ನ ಪರಿಚಯ ಆಕೆಗೆ ಆಗಿದ್ದು ವೀಳ್ಯದೆಲೆ ಬುಟ್ಟಿ ಇಟ್ಟುಕೊಂಡಿದ್ದ ಅಜ್ಜಿಯ ಹೋಗಿ ಕರಿಬೇವನ್ನು ಕೇಳಿದಾಗ. ನಾನು ಕೇಳಲೂ ಒಂದು ಕಾರಣವಿತ್ತು. ಆ ವೀಳ್ಯದೆಲೆ ಬುಟ್ಟಿಯ ಜೊತೆ ಒಂದು ಕಟ್ಟು ಕರಿಬೇವನ್ನ ಅಜ್ಜಿ ಇಟ್ಟುಕೊಂಡಿದ್ದಳು. ಅವಳಿಗಾಗಿ ಒಬ್ಬ ತಂದುಕೊಟ್ಟು ಹೋಗಿದ್ದ. ನಾನು ಪಟ್ಟನೆ ಹೋಗಿ ಕೇಳಿದ ತಕ್ಷಣ ಅಜ್ಜಿ ಒಂದು ನಿಮಿಷವನ್ನೂ ಯೋಚಿಸದೆ ಕೊಟ್ಟುಬಿಟ್ಟಳು. ನಾನು ದುಡ್ಡು ಎಷ್ಟು ಎಂದು ಕೇಳಿದೆ, ಅದಕ್ಕೆ ಅವಳ ಉತ್ತರ ನನಗೆ ಅದನ್ನ ಪುಕ್ಕಟೆಯಾಗಿ ಮತ್ತೊಬ್ಬ ವ್ಯಾಪಾರಿ ತಂದು ಕೊಟ್ಟ ನೀನು ದುಡ್ಡು ಕೊಡುವುದು ಬೇಡ ಅಂದು ಬಿಟ್ಟಳು. ನನಗೆ ಆಶ್ಚರ್ಯ ಮತ್ತು ಅದನ್ನು ತೆಗೆದು ಕೊಂಡು ಬರಲು ಭಯ. ನಾನು ಪುಕ್ಕಟೆಯಾಗಿ ಬೇಡವೇ ಬೇಡ ಎಂದರೂ ಅಜ್ಜಿ ಸುಮ್ಮನೆ ತೆಗೆದುಕೊಂಡು ಹೋಗು ಎಂದಳು. ಅದನ್ನ ತಗೊಂಡು ಮನೆಗೆ ಬರುವ ತನಕವೂ ಅದೇ ಯೋಚನೆ. ನಮ್ಮಲ್ಲಿಯೂ ಎಂತೆಂಥ ಜನರಿದ್ದಾರೆ.

ಅಂದಿನಿಂದ ಪ್ರತಿ ಭಾನುವಾರ ಅಲ್ಲಿಗೆ ಹೋದಾಗಲೆಲ್ಲ ಮತ್ತಷ್ಟು ಸಲಿಗೆ, ಸ್ವಲ್ಪ ಮಾತು ಮತ್ತು ಒಂದು ಸಣ್ಣ ನಗು. ಅವಳಿಗೂ ಸ್ವಲ್ಪ ಖುಷಿ ನನಗೆ ಸ್ವಲ್ಪ ಜಾಸ್ತಿಯೇ ಖುಷಿ. ಮಾನವ ಸಂಬಂಧಗಳಿಗೆಕೆ ಬೇಲಿ, ಎಲ್ಲಿ ಬೇಕಾದರೂ ಒಂದು ಸುಂದರ ಕ್ಷಣ ಸೃಷ್ಟಿ ಆಗಬಹುದು. ಸುತ್ತಲಿರುವವರನ್ನ ಸ್ವಲ್ಪ ಪ್ರೀತಿಯಿಂದ ಮಾತನಾಡಿಸೋಣ. ಇತ್ತೀಚಿನ ದಿನಗಳಲ್ಲಿ ತರಕಾರಿ ತರುವುದರಲ್ಲೂ ಖುಷಿ ಅಡಗಿದೆ ಎಂದು ಅನಿಸುತ್ತಿದೆ!

 ದೇವರಿಗೆ ಒಂದಷ್ಟು ವೀಳ್ಯದೆಲೆ ಕೊಡಜ್ಜಿ ಅಂದರೆ, ಒಂದಷ್ಟು ಕೊಟ್ಟು ಹತ್ತು ರುಪಾಯಿ ಕೊಟ್ಟರೆ ಎರಡೇ ರುಪಾಯಿ ತಗೊಂಡು ಉಳಿದ ಹಣ ವಾಪಸು ನೀಡುವ ಅಜ್ಜಿ ಎಲ್ಲಿ ನಮ್ಮ ಮನೆಯ ಹತ್ತಿರದ ಶೆಟ್ಟರು ಮೂರು ರೂಪಾಯಿಗೆ ಮೂರು ಎಲೆ ಕೊಟ್ಟು ದೇವರಿಗೆ ಕೊಡಬಹುದಾದ ಎಲೆ ಇಲ್ಲ ಎನ್ನುತ್ತಲೇ ಜಾಸ್ತಿ ದುಡ್ಡಿಗೆ ಮಾರುವವರು ಎಲ್ಲಿ!

ಮುಂದಿನ ವಾರ ಹೋದಾಗ ನನ್ನ ಮೊಬೈಲ್ ತಗೊಂಡು ಹೋದರೆ ಒಂದು ಫೋಟೋ ಕ್ಲಿಕ್ಕಿಸಿ ತಂದು ಲಗತ್ತಿಸುವೆ ಇಲ್ಲಿ!

Sunday, March 24, 2013

ನಮಗ್ಯಾಕೆ ಬೇಕು ರಾಜಕೀಯ! ಅದರಿಂದ ನಮಗೆ ಏನು ಪ್ರಯೋಜನ

ನನ್ನ ಕೆಲವು ಸ್ನೇಹಿತರಿಗೆ, ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತೆಲ್ಲ ನಮ್ಮ  ಶಾಲೆಗಳಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಭುಗಳು ಮತ್ತು ಪ್ರಜೆಗಳು ಇಬ್ಬರು ದ್ವಿಮುಖವಾಗುತ್ತಿರುವುದು ವಿಷಾದದ ಸಂಗತಿ.

ನಮ್ಮಲ್ಲಿ ಬಹಳ ರೀತಿಯ ಜನರಿದ್ದಾರೆ. ನಾನು ಇಲ್ಲಿ ಹೇಳುತ್ತಿರುವುದು ಆರ್ಥಿಕವಾಗಿ. ಒಂದು ಉತ್ತಮ ವರ್ಗ, ಸರ್ಕಾರದಿಂದ ಅಷ್ಟೇನೂ ಬಯಸದೆ ತಮ್ಮ ಪಾಡಿಗೆ ತಾವಿರುವ ಮತ್ತು ಮನಸಿದ್ದರೆ ಬಂದು ವೋಟು ಹಾಕುವ ಜನ. ಮತ್ತೊಂದು ಮಧ್ಯಮ ವರ್ಗ, ಇವರು ಸರಿಯಾಗಿ ವೋಟು ಮಾಡುವ ಸರ್ಕಾರದಿಂದ ಸ್ವಚ್ಛ, ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ಬಯಸುವ ಜನ. ಇನ್ನೊಂದು ಆರ್ಥಿಕವಾಗಿ ದುರ್ಬಲ ವರ್ಗ, ಇವರು ಅವರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ವೋಟು ಕೊಡುವ ಜನ.

ನಮ್ಮ ದೇಶದಲ್ಲಿ ನಾವು ಓದಿರುವಂತೆ ಮತ್ತು ನೋಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರೇ ಜಾಸ್ತಿ. ಬಹಳಷ್ಟು ಜನಕ್ಕೆ     Maslow's hierarchy of needs ಬಗ್ಗೆ ಗೊತ್ತಿರಬಹುದು( ಗೊತ್ತಿರದವರು ಇಲ್ಲಿ ಓದಿ - http://en.wikipedia.org/wiki/Maslow's_hierarchy_of_needs). ಮೊದಲು ಮಾನವನಿಗೆ ಬೇಕಾಗಿರುವುದು ಗಾಳಿ, ಊಟ, ವಸತಿ ಮತ್ತು ಆ ಕ್ಷಣದ ಅನುಕೂಲಗಳು. ಇದರಿಂದಾಗಿಯೇ ಬಹಳ ಜನ ನಮ್ಮಲ್ಲಿ ದುಡ್ಡು ತಗೊಂಡು ವೋಟು ಹಾಕುವುದು ಅಥವಾ ವಿವೇಚನೆ ಇಲ್ಲದೆ ವೋಟು ಹಾಕುವುದು ಎಂಬುದು ನನ್ನ ಅನಿಸಿಕೆ(ಇದು ತಪ್ಪು ಇರಲು ಬಹುದು, ನೀವು ಯೋಚಿಸಿ)

ಆದರೆ ಅರ್ಥಿಕ ಸ್ಥಿತಿ ಉತ್ತಮವಾದಂತೆ ಈ ರೀತಿಯ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಅಷ್ಟೇನೂ ತಲೆಯ ಕೆಡಿಸಿ ಕೊಳ್ಳುವ ಅಗತ್ಯ ಇಲ್ಲ. ಆದರೆ ನಮ್ಮ ಮನಸ್ಥಿತಿ ದೇಶವೇ ಹೀಗೆ, ನಮ್ಮ ಜನ ಒಳ್ಳೆವರನ್ನ ಗೆಲ್ಲಿಸುವುದಿಲ್ಲ, ಗೆದ್ದರೂ ಅವರು ಕೆಲಸ ಮಾಡುವುದಿಲ್ಲ ಅನ್ನುವ ಮನೋಭಾವ ಬದಲಾಗಬೇಕಿದೆ. ನಮ್ಮಲ್ಲಿ ಬದಲಾವಣೆಗಳು ಆಗುತ್ತಿವೆ, ಆದರೆ ಅದು ನಿಧಾನವಾಗಿ ನಡೆಯುತ್ತಲೇ ಇವೆ. RTI, ಭೂಮಿ (http://bhoomi.karnataka.gov.in/landrecordsonweb/) ಮತ್ತು ಸಕಾಲ ನನಗೆ ತಿಳಿದಿರುವಂತೆ ಉತ್ತಮ ಯೋಜನೆಗಳೇ. It takes time ಅಷ್ಟೇ! 


ಇನ್ನೇನು ಕರ್ನಾಟಕದ ವಿಧಾನಸಭೆಗೆ ಚುನವಾಣೆ ಘೋಷಣೆಯಾಗಿದೆ. ನಮ್ಮ ದೇಶವೇ ಹೀಗೆ ಉದ್ದರವಾಗೋಲ್ಲ, ನಮ್ಮ ಜನಾನೇ ಹೀಗೆ ಅನ್ನುವುದನ್ನ ಬಿಟ್ಟು. ನಾವೆಲ್ಲಾ ವೋಟು ಹಾಕೋಣ, ಮತ್ತು ಮತ್ತೆ ಕೆಲವರಲ್ಲಿ ಜಾಗೃತಿ ಮೂಡಿಸಿ  ಅವರು ಸರಿಯಾದ ಅಭ್ಯರ್ಥಿಗಳಿಗೆ ವೋಟು ಹಾಕುವಂತೆ ಪ್ರೋತ್ಸಾಹಿಸೋಣ. 

ನನ್ನದೊಂದು ಕೋರಿಕೆ: ನನ್ನ ಸ್ನೇಹಿತರು, ಜೊತೆಯಲ್ಲಿ India Against Corruptionನಲ್ಲಿ ಕೆಲಸ ಮಾಡಿದ ಯೋಗೇಶ್ ದೇವರಾಜ್ (https://www.facebook.com/YogeshDevarajForMLA) ಬ್ಹೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವರು. ಯೋಗೇಶ್, ಬೆಂಗಳೂರಿನ RVCEಯಲ್ಲಿ ಓದಿ ಸರಿಸುಮಾರು ೨೦ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ(ಅದರಲ್ಲಿ ೧೩ ವರ್ಷ ಅಮೇರಿಕದಲ್ಲಿ) ಈಗ ನಮ್ಮೆಲ್ಲರ ಒತ್ತಾಯಕ್ಕೆ, ಚುನಾವಣಾ ಕಣದಲ್ಲಿ ಇದ್ದಾರೆ. ದಯವಿಟ್ಟು ನೀವು ಅವರ ಬಗ್ಗೆ ಇಲ್ಲಿ "http://www.yogeshdevaraj.in/" ಮತ್ತಷ್ಟು ತಿಳಿದುಕೊಳ್ಳಿ. ನಿಮಗೆ ಈ ವ್ಯಕ್ತಿ ಉತ್ತಮ ಎಂದು ಅನಿಸಿದರೆ ಮಾತ್ರ ದಯವಿಟ್ಟು ಸ್ವಲ್ಪ ಸಹಾಯ ಮಾಡಿ. ಅವರ ಬಗ್ಗೆ ಜನಾಭಿಪ್ರಾಯ ಬೆಳೆಸಿ(https://www.facebook.com/YogeshDevarajForMLA), ಆದರೆ  ಸ್ವಲ್ಪ ಹಣ ಸಹಾಯ ಮಾಡಿ, ನಮ್ಮ ಜೊತೆ ಬಂದು ಮನೆ ಮನೆ ಸುತ್ತಿ ಜನರಲ್ಲಿ ಜಾಗ್ರತಿ ಮೂಡಿಸಿ.
ನಮ್ಮ ಕಚೇರಿಯಲ್ಲಿ ಕಂಡ ಪೋಸ್ಟರ್! Be A Hero
ಯೋಗೇಶ್ರವರ ಕಿರು ಪರಿಚಯ


Monday, February 25, 2013

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೩ ಮಾರ್ಚ್ ೨೩

ಈ ಬ್ಲಾಗಿನಲ್ಲಿ ನಾನು ಬರೆಯುವುದು ಬಹಳ ಕಡಿಮೆಯೇ! ನನ್ನ ಪ್ರವಾಸಗಳ ಪ್ರವಚನ ಮತ್ತು updateಗಳು ಇನ್ನೊಂದು www.pakkapravasi.blogspot.com ಅಲ್ಲಿ ಲಭ್ಯ. ಹೊದ ವರ್ಷ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ  ಜಯಂತ್ಯೋತ್ಸವದ ಬಗ್ಗೆ ಬರೆದಿದ್ದೆ. ಮತ್ತೆ ಈ ವರ್ಷವೂ ಬರೆಯೋಣ ಅಂದುಕೊಂಡಾಗ ಈ ಬ್ಲಾಗ್ ನೆನಪಾಯಿತು.

ಮೊನ್ನೆ  ಆಫೀಸಿನಲ್ಲಿ ಒಬ್ಬ ಸ್ನೇಹಿತ ಕೇಳ್ತಿದ್ದ ತೋಟದಪ್ಪನವರಿಗೆ ಯಾರು ಮಕ್ಕಳಿರಲಿಲ್ಲವ ಅಂತ, ನನ್ನ ಬಾಯಿಂದ ಥಟ್ಟನೆ ಬಂದ ಉತ್ತರ ನಾವೆಲ್ಲಾ ಅವರ ಮಕ್ಕಳೇ ಎಂದು(ಇದು ಸಿನಿಮೀಯ ಅನಿಸಿದರು ಸತ್ಯ ಘಟನೆ). ಅಲ್ಲಿ ಓದಿದ ಎಲ್ಲರಿಗೂ ಊಟ-ವಸತಿ ಕೊಟ್ಟು ಮತ್ತು ಬದುಕಲು ಬೇಕಾದ ಎಲ್ಲ skillsಗಳನ್ನ ಕಲಿಸಿದ ಹಾಸ್ಟೆಲ್ ಅದು(ತಿಗಣೆಯನ್ನೂ ಸ್ನೇಹಿತನನ್ನಾಗಿ ಮಾಡಿದ ಹಾಸ್ಟೆಲ್ ಅಂದರೂ ಅದು ಅತಿಶಯೋಕ್ತಿಯಾಗಲಾರದು). ಇಂಥಹ ಒಂದು ಸುಂದರ ಛತ್ರದ/ಹಾಸ್ಟೆಲಿನ ಕರ್ತೃವಿನ ಜಯಂತ್ಯೋತ್ಸವವನ್ನ ಹಳೆಯ ವಿದ್ಯಾರ್ಥಿಗಳ ಬಳಗ ಮೊನ್ನೆ ೨೩ ಫೆಬ್ರವರಿಯಂದು ಹಾಸ್ಟೆಲಿನ ಆವರಣದಲ್ಲಿ ಆಚರಿಸಿತು.

ಅದು ರಕ್ತದಾನದ ಮೂಲಕ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಜ್ಞಾನ ದಾಸೋಹದ ಮೂಲಕ... ನಮ್ಮ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಹೇಳಿದಂತೆ ಅಲ್ಲಿ ದಾನ ಮಾಡಿದ ರಕ್ತ ಪವಿತ್ರವಾದ, ಶುಭ್ರವಾದ, ಒಳ್ಳೆಯ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಿದ ರಕ್ತ. ಅದೂ ತೋಟದಪ್ಪನವರಂಥ ಮಹಾನ್ ದಾನಿಯ ನೆನಪಿನಲ್ಲಿ! ಸರಿಯಾಗಿ ೯೩ unitಗಳ ರಕ್ತವನ್ನು ದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಳಗ, ರೆಡ್ ಕ್ರಾಸ್ ಸಹಯೋಗದಿಂದ ಆಯೋಜಿಸಲಾಗಿತ್ತು. 

ರಕ್ತದಾನ ಮಾಡಿದ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು!

ಸ್ವಲ್ಪ ತಡವಾಗಿ ಶುರುವಾದರೂ, ಬಹಳ ಬೇಗ ಅದರ ವೇಗವನ್ನು ಪಡೆದುಕೊಂಡಿತು. ರಕ್ತದಾನ ಕಾರ್ಯಕ್ರಮನ್ನ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಜಯಲಿನ್ಗಪ್ಪನವರು, ರಕ್ತದಾನದ ಮಹತ್ವ ಮತ್ತು ಅವರ ಅನುಭವಗಳನ್ನ ಮೆಲುಕು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಡಾ|| ದಿವ್ಯಶ್ರೀ ರಕ್ತದಾನದ ಮಹತ್ವ, ಅವಶ್ಯಕತೆಗಳ ಬಗ್ಗೆ ತಿಳಿಸಿದರು. ಮಾತು ಮುಗಿದ ತಕ್ಷಣ ರಕ್ತದಾನ ಶುರುವಾಯಿತು. ಮೊದಲ ಬಾರಿಗೆ ರಕ್ತದಾನ ಮಾಡಿದ ನನ್ನ ಮಿತ್ರರು ರಾಜೇಶ್, ಅರುಣ್ ಮತ್ತು ಗೋಕುಲ್ ಬಹಳ ಸಂತೃಪ್ತಿಯಿಂದ ಕಂಡಿದ್ದು ಕಂಡು ಬಂತು.

ಉದ್ಯಮಿಯಾಗು, ಉದ್ಯೋಗ ನೀಡು!
ಮಧ್ಯಾನ, ಉದ್ಯಮಿಯಾಗು ಮತ್ತು ಉದ್ಯಮಿಯಾಗು ಎಂಬ ವಿಷಯದ ಮೇಲೆ ಡಾ|| ಚಂದ್ರಶೇಕರನ್ ಅವರ ಅನುಭವಗಳನ್ನ ಹಂಚಿಕೊಂಡರು. ಅವರ ಏಳು ಬೀಳುಗಳು, ಉದ್ಯಮಿ ಆಗಬೇಕಾದರೆ ಪಟ್ಟ ಶ್ರಮಗಳ ಪರಿಚಯವನ್ನ ಮಾಡಿಕೊಟ್ಟರು. ಅವರ ಅರ್ಧಾಂಗಿ "ಪೂರ್ತಿ-ಅಂಗಿಯಾಗಿ" ಕೆಲಸ ಮಾಡಿದ ತಮ್ಮ ದಿನಗಳ ಪುಟ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರು ಶ್ರೀ ಶಿವಾನಂದ್ ಮತ್ತು ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಉಪಸ್ಥಿತರಿದ್ದರು.